Sunday 18 February 2024

ಬದುಕಿನ ಹಾದಿ - 1

(ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು)

(ಕುಟುಂಬ್ ಸುಭಾಷಿತಗಳನ್ನು ಆಧರಿಸಿದ್ದು)

ಲಿಂಕ್ https://virendrakumarkochar.blogspot.com/ ಮುಖೇನ ತೆರೆದುಕೊಳ್ಳುವ ಅಂತರ್ಜಾಲ ಅಂಚೆಗಳ ಸರಣಿಯು ಉಲ್ಲೇಖಿಸುತ್ತಿರುವ ಶುಭಾಶಯಗಳು ಜೀವನದ ಅರ್ಥವನ್ನು ಹೆಚ್ಚಿಸಲು ಪ್ರೇರಕವಾಗಿವೆ. ಇದನ್ನು ಕುರಿತು ನನ್ನ ಸಂಪರ್ಕದಲ್ಲಿರುವ ಬಂಧುಮಿತ್ರರಿಗೆ ನಾನಿಂತು ಅದೇಶಿಸಿದೆ:

ನಮ್ಮ ಹೆಸರಿನೊಂದಿಗೆ ನಿಯಮಿತವಾಗಿ ಅಂತಹ ಶುಭಾಶಯಗಳನ್ನು ಸಂಯೋಜಿಸುವ ಮತ್ತು ನಮ್ಮನ್ನು ವಿಶೇಷ ವ್ಯಕ್ತಿಗಳನ್ನಾಗಿ ಚಿತ್ರಿಸುವ ಕುಟುಂಬ್ ಅಪ್ಲಿಕೇಶನ್‌ಗೆ ಅಂತ್ಯವಿಲ್ಲದ ನಮನ.

ಮಹತ್ವಾಕಾಂಕ್ಷಿ ಬರಹಗಾರರು ಈ ಶುಭಾಶಯಗಳನ್ನು ತಮ್ಮ ಜೀವನದ ನಾನಾ ಪ್ರಸಂಗಗಳಿಗೆ ಅನ್ವಯಿಸಿ, ತಮಗೆ ಅನುಕೂಲವಾದ ಭಾಷೆಯಲ್ಲಿ ಬರೆಯುವ ಮೂಲಕ ತಮ್ಮ ಜೀವನಚರಿತ್ರೆಯನ್ನು ರಚಿಸಬಹುದು, ಹಾಗೂ ರತ್ನಾಕರ್ ಅವರಂಥ ಪ್ರಕಾಶಕರ ಉಚಿತ ಬೆಂಬಲದ ಮೂಲಕ (ಮೊಬೈಲ್ # 8884540400) ಪ್ರಸಿದ್ಧರಾಗಬಹುದು.

ಅಂಥ ಜೀವನಚರಿತ್ರೆಗಳನ್ನು ಆರಂಭದಲ್ಲಿ ಅನೇಕ ಅಧ್ಯಾಯಗಳ ರೂಪದಲ್ಲಿ ಪ್ರಕಟಿಸಲು ಕೆಲವು ಬ್ಲಾಗರ್ ಖಾತೆಗಳ ರಚನೆಗೆ ನಾನೂ ತೊಡಗಿಕೊಳ್ಳುವ ಮೂಲಕ ಕುಟುಂಬ್ ಅಪ್ಲಿಕೇಶನ್‌ಗೆ ಹೆಚ್ಚಿನ ಪ್ರಚಾರ ಒದಗಿಸಲು ಯತ್ನಿಸಬಹುದು.

ಮೇಲಿನಂತೆ ಹತ್ತು ಹಲವರಿಗೆ ರವಾನಿಸಿದ ಆದೇಶಕ್ಕೆ ಅನುಗುಣವಾಗಿ, ಸ್ವತಃ ಕೆಲಸ ಮಾಡಿ ನಿದರ್ಶನ ಒದಗಿಸಬೇಕಾದ್ದು ಅತ್ಯಗತ್ಯ. ಆ ಮೇರೆಗೆ ಮುಂದಡಿಯಿಡುತ್ತ ಒಂದು ಗ್ರಂಥದ ರಚನೆಯನ್ನು ಇದೋ ಆರಂಭಿಸುತ್ತಿದ್ದೇನೆ.

ಮೇಲ್ಕಂಡ ಉಕ್ತಿಯ ಅರ್ಥ: ನಾನು ಕಲ್ಲು, ನನ್ನ ತಂದೆ-ತಾಯಿಗಳು ನನ್ನ ಕುಶಲಕರ್ಮಿಗಳು, ಆದ್ದರಿಂದ ಅವರು ನನ್ನ ಎಲ್ಲಾ ಪ್ರಶಂಸೆಗೆ ಅರ್ಹರು. ಈ ಘೋಷವಾಕ್ಯ, ನಾವು ಎಸಗುವ ಹಿರಿಯರ ಸೇವೆಯಲ್ಲಿ ಲೋಪವಿರಬಾರದು ಎಂದು ಸೂಚಿಸುತ್ತದೆ.

ಮೂರ್ತಿಪೂಜೆ ಅರ್ಥಹೀನವೆಂದು ವಾದಿಸುವವರಿಗೆ ನಮ್ಮಮ್ಮ ನೀಡುವ ಸಮಾಧಾನವನ್ನು ಗಮನಿಸಿ: ಸಕಲ ಸೌಲಭ್ಯಗಳಿಗೆ ಕಾರಣವಾದ, ಅರ್ಹರಲ್ಲದಿದ್ದರೂ ಸಮಸ್ತವನ್ನೂ ನಿರ್ವಂಚನೆಯಿಂದ ನಮಗೆ ಒದಗಿಸಿ, ಸುಖದುಃಖಗಳ ಸರಮಾಲೆ ಧರಿಸಿ ಮುನ್ನುಗ್ಗಲು ಅನುವು ಮಾಡಿಕೊಡುವ ಪ್ರಕೃತಿಗೆ ಒಂದು ಸಾಮಾನ್ಯವಾದ ಕೃತಜ್ಞತೆ ಸಲ್ಲಿಸುವುದು ನಮ್ಮ ಕರ್ತವ್ಯವಲ್ಲವೇ? ಆಲೋಚನೆಯ ಸಾಮರ್ಥ್ಯ ಇಲ್ಲದ ನಾಯಿಗೆ ಒಂದು ಹಿಡಿ ಅನ್ನ ಹಾಕಿದರೂ ಅದು ಬದುಕಿನುದ್ದಕ್ಕೂ ನಮಗೆ ಕೃತಜ್ಞತೆ ಸಲ್ಲಿಸುವುದು ಕಾಣದೆ? ಬುದ್ಧಿಜೀವಿಗಳಾದ ನಾವಿನ್ನೆಷ್ಟು ಕೃತಜ್ಞರಾಗಿರಬೇಡ? ಕೆಳಕಂಡ ವಿಡಿಯೋ ಗಮನಾರ್ಹ!

https://youtu.be/J0ocUXjlB1w?si=M1dNSpYkX7Zf6y1j

ರಸ್ತೆ ಬದಿ, ಜಲಪಾತದ ತುದಿ ಮುಂತಾಗಿ ಎಲ್ಲಿದ್ದರೆ ಅಲ್ಲಿಂದಲೇ ಅಗಾಧವಾದ, ಅಸದೃಶ ಬೆಡಗಿನ ಪ್ರಕೃತಿಗೆ ನಾವು ನಮ್ಮ ಕೃತಜ್ಞತೆ ಸಲ್ಲಿಸಬಹುದು. ಮನಃಪೂರ್ವಕವಾಗಿ ಸಲ್ಲಿಸುವ ಕೃತಜ್ಞತೆ ಉಲ್ಲಾಸವನ್ನುಂಟುಮಾಡುವುದು ನಿರ್ವಿವಾದ. ಆದರೆ ಬಹುತೇಕರು ಏಕಾಗ್ರತೆಯ ಉದ್ದೇಶದಿಂದ ಪ್ರಕೃತಿಯನ್ನು ತಮ್ಮ ಸ್ವರೂಪ ಹೇಗಿರುವುದೋ ಹಾಗೆಯೇ, ಉಡುಗೆತೊಡುಗೆ - ಆಭರಣಗಳಿಂದ ಸಜ್ಜುಗೊಳಿಸಿ ಆರಾಧಿಸುವ ಅಪೇಕ್ಷೆ ಹೊಂದುವುದು ಸೂಕ್ತವೇ. ಎಲ್ಲೆಲ್ಲೂ ದೇವಸ್ಥಾನ, ಚರ್ಚುಗಳಲ್ಲಿ ನೆರೆದಿರುವ ಜನಸ್ತೋಮ ಅಂಥ ಅಪೇಕ್ಷೆಯ ಸಂಕೇತವಲ್ಲದೆ ಬೇರಲ್ಲ.

ಪ್ರಕೃತಿಯನ್ನು ತನಗಿಷ್ಟವಾದ ವಿವಿಧ ನಾಮಗಳಿಂದ ಸ್ಮರಿಸುತ್ತಲೇ ಮುಂಜಾನೆ ಏಳುವುದು ನಮ್ಮಮ್ಮನಿಗೆ ತುಂಬಾ ಇಷ್ಟ. ಅದಕ್ಕೆ ಅನುಗುಣವಾಗಿ ಬೆಳಗಿನ ಅರಕ್ಕೂ ಮುನ್ನ ಅವರು ವಿಷ್ಣು ಸಹಸ್ರನಾಮ, ರಾಮರಕ್ಷಾ ಸ್ತೋತ್ರ, ಗಜೇಂದ್ರ ಮೋಕ್ಷ, ಕನಕಧಾರಾ ಸ್ತೋತ್ರ ಮುಂತಾದುವನ್ನು ಆಲಿಸಲು ಅನುಕೂಲ ಮಾಡಿಕೊಡುವುದು ನನ್ನ ಅಭ್ಯಾಸ.

ಈ ದಿನ ಅಮ್ಮ ಎಂದಿಗಿಂತ ಮುಂಚಿತವಾಗಿ ಎದ್ದು, ಭಾಗವತದಲ್ಲಿ ಸಂಭವಿಸುವ ಕೃಷ್ಣ - ಕುವಲಯಾಪೀಡ ಸಂಗ್ರಾಮದ ವಿಡಿಯೋ (Link: https://youtu.be/QpTHdmeeC5E?si=jlUPlTleXBb5vzen) ವನ್ನು ವೀಕ್ಷಿಸುವ ಅಪೇಕ್ಷೆ ವ್ಯಕ್ತಪಡಿಸಿದರು. ಇದಕ್ಕೂ, ವಾಡಿಕೆಯ ಸ್ತೋತ್ರಗಳ ಆಲಿಕೆಗೂ ತಕ್ಕ ವ್ಯವಸ್ಥೆಯನ್ನು ಮಾಡಿಕೊಟ್ಟು ಮಾರ್ನಿಂಗ್ ವಾಕ್ ಸಲುವಾಗಿ ನಾನು ಹೊರಟೆ. ಮುಂಜಾನೆ ಸಮಯದಲ್ಲಿ ವಾಕ್ ಮಾಡಿದಾಗ ಲವಲವಿಕೆ ಸಂಜೆಗಿಂತ ಹೆಚ್ಚಾಗಿರುವ ಅನುಭವ ನಿಶ್ಚಿತ.

No comments:

Post a Comment